Thursday, September 20, 2012



                   ಸ್ವರ್ಗ ಕೃಷಿ ದಿನಾಚರಣೆ -

       ಸ್ವರ್ಗ ಸ್ವಾಮೀ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿಕರ ದಿನಾಚರಣೆ ಜರಗಿತು. ಜೀವ ವೈವಿಧ್ಯ ವರ್ಷದ ಹಿನ್ನಲೆಯಲ್ಲಿ ಕಳೆದ ವರ್ಷ ಶಾಲಾ ವಠಾರದಲ್ಲಿ ಬಾಳೆ,ತೊಂಡೆ, ಬದನೆ, ಬಸಳೆ, ಅಲಸಂಡೆ,ಹರಿವೆ,ಅನನಾಸು ಸಹಿತ ನಾನಾ ಬೆಳೆಗಳನ್ನು ಬೆಳೆಸಲಾಗಿದ್ದು ಉತ್ತಮ ಇಳುವರಿಯನ್ನು ಪಡೆಯಲಾಗಿತ್ತು.ಕೃಷಿ ಕಾರ್ಯದಲ್ಲಿ ಉತ್ತಮವಾಗಿ ನಿರ್ವಹಿಸಿದ ವಿದ್ಯಾರ್ಥಿಗಳಾದ ಮಾಸ್ಟರ್ ಪ್ರತಾಪ್ ಮತ್ತು ಲೋಹಿತ್ ಇವರಿಗೆ ವಿಶೇಷ ಕೃಷಿ ಉಡುಗೊರೆ ನೀಡಿ ಗೌರವಿಸಲಾಯಿತು.
      ದೈನಂದಿನ ಎಸೆಂಬ್ಲಿಯಲ್ಲಿ ಮುಖ್ಯ ಶಿಕ್ಷಕ ಶ್ರೀ ಕೆ.ವೈ.ಸುಬ್ರಹ್ಮಣ್ಯ ಭಟ್ ಮಕ್ಕಳಿಗೆ ಉಡುಗೊರೆ ನೀಡಿ, ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.

No comments:

Post a Comment