Thursday, September 20, 2012

ಸ್ವಾತಂತ್ರ್ಯೋತ್ಸವ

           ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ೬೫ನೇ ಸ್ವಾತಂತ್ರ್ಯೋತ್ಸವವು ೬೫ ವೇಷದೊಂದಿಗೆ ಸಂಭ್ರಮದಿಂದ ಜರಗಿತು. ಸ್ವಾತಂತ್ರ್ಯ ಉತ್ಸವದ ಅತಿಥಿಗಳಾಗಿ ಆಗಮಿಸಿದ ಛತ್ತೀಸಗಢ್ ಪ್ರಾಂತ್ಯದಲ್ಲಿ ಸೈನಿಕರಾಗಿ ಸೇವೆ ನಿರ್ವಹಿಸುತ್ತಿರುವ ರಮೇಶ್ ನಾಯ್ಕರವರು ಧ್ವಜಾರೋಹಣಗೈದರು. ಅತಿಥಿಗಳಿಗೆ ವ್ಯವಸ್ಥಾಪಕರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
        ಎಲ್.ಪಿ. ವಿಭಾಗದ ಮಕ್ಕಳಿಂದ ದೇಶಭಕ್ತಿಯನ್ನು ಸಾರುವ ಹಾಡಿಗೆ ೨ ಡಿಸ್ ಪ್ಲೇ ಡ್ಯಾನ್ಸ್‌ಗಳ ಪ್ರದರ್ಶನ ಜರಗಿತು. ೬೫ನೇ ಹರೆಯದ ಸ್ವಾತಂತ್ರ್ಯೋತ್ಸವಕ್ಕೆ ಸ್ವಾತಂತ್ರ್ಯ ಹೋರಾಟಗಾರರ, ವಿವಿಧ ರಾಜ್ಯದ ಉಡುಪುಗಳ, ವಿವಿಧ ಧರ್ಮದ ವೇಷ ದೊಂದಿಗೆ ಜಾತ್ಯಾತೀತ ರಾಷ್ಟ್ರದ ಕಲ್ಪನೆಯನ್ನು ಮೂಡಿಸುವ ಸಾಕ್ಷ್ಯ ಪ್ರದರ್ಶನವನ್ನು ಪಾತ್ರ ಪರಿಚಯದೊಂದಿಗೆ ಸ್ಥಬ್ಧ ಚಿತ್ರವನ್ನು ಪ್ರಸ್ತುತ ಪಡಿಸಲಾಯಿತು.
      ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕ ಶ್ರೀ ಹೃಷಿಕೇಶ ವಿ.ಎಸ್, ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ. ಮುಖ್ಯೋಪಾಧ್ಯಾಯರು ಶ್ರೀ ಕೆ.ವೈಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಇಡೀ ರಾಷ್ಟ್ರವೇ ಸಂಭ್ರಮಿಸುವ ಈ ಕಾರ್ಯಕ್ರಮಕ್ಕೆ ಬಹು ಸಂಖ್ಯೆಯಲ್ಲಿ ಹೆತ್ತವರು, ಊರವರು ಆಗಮಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.

                            

 











No comments:

Post a Comment